
ಗ್ಯಾರಂಟಿ ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮ:ಬಡವರ ಬಾಳಿಗೆ ಬೆಳಕಾದ “ಗೃಹ ಜ್ಯೋತಿ”
“ಉಚಿತ ಬೆಳಕು, ಸುಸ್ಥಿತ ಬದುಕು” ಎಂಬ ಘೋಷ್ಯವಾಕ್ಯದೊಂದಿಗೆ ರಾಜ್ಯದಲ್ಲಿ ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ “ಗೃಹ ಜ್ಯೋತಿ” ಯೋಜನೆ ಜಾರಿಗೆ ತಂದಿದ್ದು, ನಾಡಿನ ಬಡಜನರ ಪಾಲಿಗೆ ಇದು ಬೆಳಕಾಗಿ ಪರಿಣಮಿಸಿದೆ.ಅಧುನಿಕ ಜೀವನದಲ್ಲಿ ವಿದ್ಯುತ್ ಇಲ್ಲದೆ ದಿನಚರಿ ಶುರುವಾಗುವುದಿಲ್ಲ. ದುಬಾರಿ ದುನಿಯಾದಲ್ಲಿ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗ ದೊಡ್ಡ ಆರ್ಥಿಕ ಪೆಟ್ಟು ತಿಂದಿದೆ. ಆರ್ಥಿಕ ಮುಗ್ಗಟ್ಟಿನಿಂದ ಕಷ್ಟದಲ್ಲಿರುವ ಬಡ ಜನರ ಕಣ್ಣಿರ ಒರೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು 200 ಯೂನಿಟ್ ವರೆಗೆ