August 4, 2025 10:42 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

ಕಲಬುರಗಿ

ಅಫಜಲಪೂರ ತಾಲೂಕಿನ ವಿವಿಧ ಬಹುಗ್ರಾಮ ಕುಡಿಯುವ ನೀರಿನ ಘಟಕಗಳಿಗೆ ಜಿ.ಪಂ. ಸಿ.ಒ.ಓ. ಅವರು ಭೇಟಿ ನೀಡಿ ಪರಿಶೀಲನೆ

ಕಲಬುರಗಿ,20.ಮಾ.25.-ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕು ವ್ಯಾಪ್ತಿಯಲ್ಲಿ ಬರುವ ಮಲ್ಲಾಬಾದ, ಮಾಶಾಳ, ಕಲ್ಲೂರ, ಗಾಣಗಾಪೂರ ಹಾಗೂ ಅತನೂರ ಬಹುಗ್ರಾಮ ಕುಡಿಯುವ ನೀರಿನ (ಒಗಿS) ಘಟಕಗಳ ಜಾಕವೇಲ್ ಮತ್ತು ನೀರು ಶುದ್ಧೀಕರಣ ಘಟಕಗಳಿಗೆ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಬುಧವಾರ (ಮಾರ್ಚ್ 19 ರಂದು) ಭೇಟಿ ನೀಡಿ ಪರಿಶೀಲಿಸಿದರು. ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು, ಅಫಜಲಪೂರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಫಜಲಪೂರ

ಕಲಬುರಗಿಯಲ್ಲಿ ಯುನೈಟೆಡ್ ಹಾಸ್ಪಿಟಲ್‌ನಿಂದ ರಂಜಾನ್ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಇಫ್ತಾರ್.

ಕಲಬುರಗಿಯಲ್ಲಿ ಯುನೈಟೆಡ್ ಹಾಸ್ಪಿಟಲ್‌ನಿಂದ ರಂಜಾನ್ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ ಸಿದ್ದಾರೆಡ್ಡಿ ಅವರು ಮುಸ್ಲಿಮರೊಂದಿಗೆ ಉಪಾಹಾರ ಸೇವಿಸಿದರು.

ಜಿಲ್ಲೆಯ 131 ಪರೀಕ್ಷಾ ಕೇಂದ್ರಗಳ ಮೇಲೆ ವೆಬ್‌ಕಾಸ್ಟಿಂಗ್ ಮೂಲಕ ನಿಗಾ-ಭಂವರ್ ಸಿಂಗ್ ಮೀನಾ

ಕಲಬುರಗಿ,20.ಮಾ.25.-ಪ್ರಸಕ್ತ 2025ನೇ  ಸಾಲಿನ  ಎಸ್.ಎಸ್.ಎಲ್.ಸಿ. ಪರೀಕ್ಷೆ-1ಯು ಮಾರ್ಚ್ 21 ರಂದು ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ನಕಲು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ 131 ಪರೀಕ್ಷಾ ಕೇಂದ್ರಗಳ ಮೇಲೆ ಇದೇ ಪ್ರಥಮ ಬಾರಿಗೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ತಿಳಿಸಿದರು. ಸಿ.ಸಿ.ಟಿ.ವಿ. ವೆಬ್‌ಕಾಸ್ಟಿಂಗ್ ಪರಿವೀಕ್ಷಣೆಗಾಗಿ ಈಗಾಗಲೇ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಮ್‌ನ್ನು  ವೀಕ್ಷಿಸಿದ ಅವರು,  ಈ ಪರೀಕ್ಷೆಯು  ಇದೇ ಮಾರ್ಚ್ 21 ರಿಂದ ಏಪ್ರಿಲ್ 4 ರ

ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ರಂಗ ಪಂಚಮಿ ನಿಮಿತ್ಯ ದೇವರ ಸಮ್ಮುಖದಲ್ಲಿ ಸಮಸ್ತ ಅರ್ಚಕ ವರ್ಗ ಭಕ್ತರೊಡನೆ ರಂಗದ ಓಕುಳಿ ಆಡಿ ಸಂಭ್ರಮಿಸಿದರು.

ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ರಂಗ ಪಂಚಮಿ ನಿಮಿತ್ಯ ದೇವರ ಸಮ್ಮುಖದಲ್ಲಿ ಸಮಸ್ತ ಅರ್ಚಕ ವರ್ಗ ಭಕ್ತರೊಡನೆ ರಂಗದ ಓಕುಳಿ ಆಡಿ ಸಂಭ್ರಮಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ್ ಭಟ್ ಪೂಜಾರಿ, ಕಿರಣ್ ಪೂಜಾರಿ, ಆಶೀರ್ವಾದಭಟ್ ಪೂಜಾರಿ, ದೇವು ಪೂಜಾರಿ, ಪುರುಷೋತ್ತಮ್, ಚೇತನ್ ಪೂಜಾರಿ ಹಾಗೂ ಇತರರಿದ್ದರು

ಮಾರ್ಚ್ 21 ರಂದು ಮಾನವನ ಅದ್ಭುತ ದೇಹ ಪ್ರದರ್ಶನಾಲಯದ ಉದ್ಘಾಟನೆ

ಕಲಬುರಗಿ,19ಮಾ.25.-ಮಾನವನ ಅದ್ಭುತ ದೇಹ ಪ್ರದರ್ಶನಾಲಯದ ಉದ್ಘಾಟನಾ ಸಮಾರಂಭವು ಇದೇ ಮಾರ್ಚ್ 21 ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಜರುಗಲಿದೆ.  ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಮಾನವ ಅದ್ಭುತ ದೇಹದ ಪ್ರದರ್ಶನಾಲಯವನ್ನು ಉದ್ಘಾಟಿಸುವರು. ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂಗರಚನಾಶಾಸ್ತç ವಿಭಾಗದ ಮುಖ್ಯಸ್ಥ ಡಾ. ರಾಜಕುಮಾರ್ ಕೆ.ಆರ್. ಅವರು ಘನ ಉಪಸ್ಥಿತಿವಹಿಸುವರು. 

ಕರ್ನಾಟಕ ಕೆ.ಪಿ.ಟಿ.ಸಿ.ಎಲ್ ಗುತ್ತಿಗೆದಾರರ ಕೇಂದ್ರ ಕಾರ್ಯಕಾರಿ ಸಮಿತಿಯ ಪ್ರತಿನಿಧಿಯಾಗಿ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ವಿಷ್ಣುಕಾಂತ ಮೂಲಗಿ.

ಕರ್ನಾಟಕ ಕೆ.ಪಿ.ಟಿ.ಸಿ.ಎಲ್ ಗುತ್ತಿಗೆದಾರರ ಕೇಂದ್ರ ಕಾರ್ಯಕಾರಿ ಸಮಿತಿಯ ಪ್ರತಿನಿಧಿಯಾಗಿ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ವಿಷ್ಣುಕಾಂತ ಮೂಲಗಿ, ಅವರನ್ನು ನೇಮಕವನ್ನು ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ. ರಮೇಶ್ ಅವರ ಆದೇಶ ಮೇರೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹೆಚ್. ವಿ. ಚಂದ್ರಬಾಬು, ಅವರು ನೇಮಕ ಮಾಡಿದರೆ ನೇಮಕಗೊಂಡ ಕೂಡಲೇ ಕರ್ನಾಟಕ ವಿವಿಧ ಜಿಲ್ಲೆಯ ಕೆ.ಪಿ.ಟಿ.ಸಿ.ಎಲ್ ಗುತ್ತಿಗೆದಾರರ ಸದಸ್ಯರ ಸಮಸ್ಯೆಗಳನ್ನು ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಪತ್ರಿಕಾ

ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸೇವೆ

ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸೇವೆ. ಪ್ರಸಾದಕ್ಕೆ ಸ್ವಾಗತಿಸುವವರು : ಶರಣು ವಾರದ,ಮಂಜು ಪಾಟ್ಲಿ,ವಿಶ್ವನಾಥ ಕಪನೂರ,ಗುರುರಾಜ ವಾಡಿ,ಶಿವಾನಂದ ಮೆಂತೆ ಮತ್ತು ಇತರರು. ದಿನಾಂಕ: 19-03-2025 ರಂದು ಗಂಜ್ ಏಸ್ ನಿಲ್ದಾಣ ಎದುರುಗಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಲ್ಲರೂ ಬಂದು ಸ್ವೀಕರಿಸಬೇಕಾಗಿ ವಿನಂತಿ.

ಮಾರ್ಚ್ 12 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,10 ಮಾ.25-ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ ಪ್ರಸ್ತುತ10/33/11 ಕೆ.ವಿ. ನಾಲವಾರ ವಿದ್ಯುತ್ ಉಪಕೇಂದ್ರದಲ್ಲಿ ಮೆಂಟೇನನ್ಸ್ ಕಾರ್ಯ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಇದೇ ಮಾರ್ಚ್ 12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ವಿತರಣಾ ಕೇಂದ್ರಗಳಲ್ಲಿ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-2ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. ಶಹಾಬಾದ ಉಪವಿಭಾಗದ 110/33/11 ಕೆ.ವಿ ನಾಲವಾರ ವಿದ್ಯುತ್ ವಿತರಣಾ

ರಸ್ತೆ,ಚರಂಡಿ, ಶೌಚಾಲಯಗಳು, ಉದ್ಯಾನವನ್ನ  ದುರಸ್ಥಿಗೊಳಿಸಲು ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಸಮರ್ಪಕವಾಗ ಬಳಸಿಕೊಳ್ಳಲಾಗುತ್ತದೆ.ಪಾಲಿಕೆ ಆಯುಕ್ತ ಅವಿನಾಶ ಶಿಂಧೆ

ಕಲಬುರಗಿ,4.ಮಾ.24 : ರಸ್ತೆ ಚರಂಡಿಗಳು ಶೌಚಾಲಯಗಳು ಉದ್ಯಾನವನ್ನ ಬೋರವೆಲ್, ದುರಸ್ಥಿ ಮತ್ತು   ಸಾರ್ವಜನಿಕ ಸಮಸ್ಯೆಗಳ ಕುರಿತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಹೇಳಿದರು. ಬುಧುವಾರದಂದು ಟೌನ ಹಾಲಿನಲ್ಲಿ ಮುಂಗಡ ಪತ್ರ ತಯಾರಿಸುವ  ಪೂರ್ವ ಭಾವಿ ಸಭೆ  ಯಲ್ಲಿ ಅಧ್ಯಕ್ಷತೆ ವಹಿಸಿ  ಮಾತನಾಡಿ, ಬೀದಿ ನಾಯಿಗಳ ಹಾವಳಿ ತಡೆಯಲು  ಸಿಬ್ಬಂದಿ ಕಾರ್ಯಾಚರಣೆ ಮಾಡಿ ಸಾರ್ವಜನಿಕರಿಗೆ ಆಗುವ ಅನಾಹುತ ತಪ್ಪಿಸಲು ಕ್ರಮವಹಿಸುವುದು ಎಂದು ಹೇಳಿದರು. ಸಿದ್ಧರಾಮಯ್ಯ ಹಿರೇಮಠ ಮಾತನಾಡಿ,   ಮಹಿಳೆಯರಿಗೆ ಶೌಚಾಲಯ ಇರುವುದಿಲ್ಲ, ನಗರದ ಹಸರೀಕರಣಗೊಳಿಸಬೇಕು ಸಾರ್ವಜನಿಕರಿಗೆ

ಮಾರ್ಚ 12 ರಂದು ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ ಫೂರ್ವಭಾವಿ ಸಭೆಯಲ್ಲಿ ನಿರ್ಧಾರ

ಕಲಬುರಗಿ:04.ಮಾ.25:  ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು  ಸಭೆಯಲ್ಲಿ ನಿರ್ಧಾರಿಸಲಾಯಿತು.ಸೋಮವಾರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಶ್ರೀ ರೇಣುಕಾಚಾರ್ಯ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆಯಲ್ಲಿ ಮಾರ್ಚ 12 ರಂದು ಮಧ್ಯಾಹ್ನ 12.30 ಗಂಟೆಗೆ ಸಾರ್ವಜನಿಕ ಉದ್ಯಾನ ವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ  ನಡೆಯುವ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರ ಸರಿಯಾದ ಸಮಯಕ್ಕೆ ಹಾಜರಾಗಿ ಜಯಂತಿ ಆಚರಿಸಲು ಜಿಲ್ಲಾಧಿಕಾರಿಗಳ ಕಾರ್ಯಾಲದ ಚುನಾವಣೆಯ ಶಾಖೆಯ ತಹಶೀಲ್ದಾರ ಪಂಪಯ್ಯ ಸಭೆಯಲ್ಲಿ ತಿಳಿಸಿದರು. ಅಂದು ಬೆಳಿಗ್ಗೆ 9 ಗಂಟೆಗೆ