ಕಲ್ಬುರ್ಗಿಯಲ್ಲಿ ಏಪ್ರಿಲ್ 29ರಂದು ಜಿಲ್ಲಾ ಬಸವ ಜಯಂತಿ ಸಮಿತಿ ವತಿಯಿಂದ ಬಸವ ಜಯಂತಿ ಹಮ್ಮಿಕೊಂಡಿದ್ದಾರೆ ಆದರೆ ಈ ಜಯಂತಿಯು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಮಾಡುತ್ತಿದ್ದಾರೆ ಎಂದು ಬಿಂಬುಸುತ್ತಿದ್ದಾರೆ ಏಕೆಂದರೆ ಚಿಂಚೋಳಿಯಲ್ಲಿ ಇಂದು ಜಿಲ್ಲಾ ಬಸವ ಜಯಂತಿಯ ಉತ್ಸವ ಸಮಿತಿಯ ಅಧ್ಯಕ್ಷರಾದ ಎಂ ವೈ ಪಾಟೀಲ, ಅವರ ಅಧ್ಯಕ್ಷತೆಯಲ್ಲಿ ಜರುಗಿದೆ ಈ ಸಭೆಯಲ್ಲಿ ತಾಲೂಕ ಲಿಂಗಾಯತ ಸಮಾಜದ ತಾಲೂಕ ಪದಾಧಿಕಾರಿಗಳಿಗೆ ಹಾಗೂ ಇನ್ನು ಉಳಿದ ಬಸವ ಪರ ಸಂಘಟನೆಗಳಿಗೆ ಜಿಲ್ಲಾ ಬಸವ ಜಯಂತಿಯ ಅಧ್ಯಕ್ಷರು ಸಭೆ ಇದೆ ಎಂದು ಹೇಳಿಲ್ಲ ಈ ಸಭೆ ಬ್ಯಾನರ್ ನೋಡಿದ್ದಾರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಜಿಲ್ಲಾಧ್ಯಕ್ಷರು ಫೋಟೋ ಮತ್ತು ಚಿಂಚೋಳಿ ತಾಲೂಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಅಧ್ಯಕ್ಷರ ಫೋಟೋ ಹಾಕೊಂಡು ಸಭೆಯನ್ನು ಮಾಡಿದ್ದಾರೆ ಇದಕ್ಕೆ ತಾಲೂಕ ವೀರಶೈವ ಲಿಂಗಾಯತ ಸಮಾಜದ ತಾಲೂಕ ಘಟಕ ವತಿಯಿಂದ ಖಂಡಿಸುತ್ತೇವೆ ಏಕೆಂದರೆ ಜಿಲ್ಲಾ ಬಸವ ಜಯಂತಿಯ ಕಾರ್ಯಕ್ರಮವು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ವತಿಯಿಂದ ಮಾಡುತ್ತಿಲ್ಲ.
ಈ ಜಯಂತಿಯು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಮತ್ತು ಜಿಲ್ಲಾ ವೀರಶೈವ ಲಿಂಗಾಯತ್ ಸಮಾಜ ಹಾಗೂ ಅನೇಕ ಬಸವ ಪರ ಸಂಘಟನೆಗಳು ಕಲ್ತು ಮಾಡುತ್ತಿದ್ದಾರೆ.
ಇಂದು ಚಿಂಚೋಳಿಯಲ್ಲಿ ನಡೆದ ಸಭೆಯ ಬ್ಯಾನರ್ ನಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷರಾದ ಅರುಣಕುಮಾರ ಪಾಟೀಲ್ ಎಸ್ ಕೊಡಲಹಂಗರಗಾ, ಅವರ ಫೋಟೋನೇ ಹಾಕಿಲ್ಲ ಹಾಗಾಗಿ ಇನ್ನು ಮುಂದೆ ದಿನಗಳಲ್ಲಿ ಬೇರೆ ತಾಲೂಕಕ್ಕೆ ಜಿಲ್ಲಾ ಬಸವ ಸಮಿತಿ ಅಧ್ಯಕ್ಷರು ಸಭೆ ಮಾಡುವಾಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರ ಫೋಟೋಗಳನ್ನು ಹಾಕಿ ಸಭೆ ಮಾಡಬೇಕು ಅದೇ ರೀತಿ ಬಸವ ಪರ ಸಂಘಟನೆಗಳ ಜಿಲ್ಲಾ ಅಧ್ಯಕ್ಷರ ಫೋಟೋವನ್ನು ಹಾಕಬೇಕೆಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ರೇವಣಸಿದ್ದಪ್ಪ ದಾದಾಪೂರ, ವಿಜಯಕುಮಾರ ಬೆಳಕೇರಿ, ಉಮಾ ಪಾಟೀಲ, ಬೀಡ ಜಂಗಮದ ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಉಡುಪಿ, ವೀರಶೆಟ್ಟಿ ಮಗಿ, ಶಿವಶರಣಪ್ಪ ಡೆಂಗಿ, ಸಂಪತ್ ಮುಸ್ಟರಿ, ಸಂತೋಷ್ ಪಾಟೀಲ, ವೀರೇಶ್ ಪಾಟೀಲ್, ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.