ಕಲಬುರಗಿ,ಫೆ.28: ಕಲಬುರಗಿ ಮಹಾನಗರ ಪಾಲಿಕೆಯು 2025-26ನೇ ಸಾಲಿಗೆ ಮುಂಗಡ ಪತ್ರ ತಯ್ಯಾರಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಮಾರ್ಚ್ 5 ರಂದು ಬೆಳಿಗ್ಗೆ 11 ಗಂಟೆಗೆ ಇಂದಿರಾ ಸ್ಮಾರಕ ಭವನದಲ್ಲಿ ಸಾರ್ವಜನಿಕರ ಸಲಹೆ-ಸೂಚನೆ ಪಡೆಯಲು ಪೂರ್ವಭಾವಿ ಸಭೆ ಆಯೋಜಿಸಿದೆ ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸಜ್ಜನ್ ತಿಳೀಸಿದ್ದಾರೆ.
ಇಂದಿರಾ ಸ್ಮಾರಕ ಭವನದಲ್ಲಿ ನಡೆಯುವ ಸಭೆಗೆ ಮಹಾನಗರದ ಸಾರ್ವಜನಿಕರು, ನೊಂದಾಯಿತ ಸ್ಥಳೀಯ ಕಲ್ಯಾಣ ಸಂಘ, ವ್ಯಾಪಾರ, ಉದ್ಯಮ ನಡೆಸುವ ಸಂಘ-ಸಂಸ್ಥೆಗಳು, ಎನ್.ಜಿ.ಓ ಸಂಘಗಳು ಮತ್ತು ಅದರ ಪ್ರತಿನಿಧಿಗಳು ಆಗಮಿಸಿ ಅಗತ್ಯ ಸಲಹೆ ಸೂಚನೆ ನೀಡುವಂತೆ ಅವರು ಕೋರಿದ್ದಾರೆ.
