ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ಮಾದಿಗ ಜಾತಿ ಬರೆಸಬೇಕು : ಗೋಪಾಲರಾವ ಕಟ್ಟಿಮನಿ
ಚಿಂಚೋಳಿ, ಏ-5, ರಾಜ್ಯ ಸರ್ಕಾರದಿಂದ ಒಳ ಮೀಸಲಾತಿ ಜಾರಿಗಾಗಿ ಇದೇ ಏಪ್ರಿಲ್ 6 ರಿಂದ ಪರಿಶಿಷ್ಟ ಜಾತಿ ಹಾಗೂ ಉಪ ಜಾತಿಗಳ ಸಮೀಕ್ಷೆಯ ಸಮಯದಲ್ಲಿ ರಾಜ್ಯದಲ್ಲಿ ಎಸ್ಸಿ ಪಟ್ಟಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗರು ಜಾತಿ ಗಣಿತಯ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ಮಾದಿಗ ಜಾತಿ ಬರೆಸಬೇಕೆಂದು ಅವರು ಕರೆ ನೀಡಿದರು. ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ ನರಸಪ್ಪ ಕಿವುಡನೋರ್, ಸುನೀಲ್ ಸಾಲಗಾರ ಮಲ್ಲು ಕೋಡಂಬಲ್ ವಿಜಯ ರಾಜ್ ಕೋರಡಂಪಳ್ಳಿ, ಅನೀಲ್ ಕ್ರಾಂತಿ,…