ಯಾದಗಿರಿ : 09.ಮೇ 25, : ಜಿಲ್ಲೆಯಲ್ಲಿ 5 ರಿಂದ 16ರ ವರ್ಷದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಬೇಸಿಗೆ ಶಿಬಿರವನ್ನು ಮಕ್ಕಳಿಗೆ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲ, ನಾಟಕ, ನೃತ್ಯ, ಯೋಗ, ಕರಾಟೆ, ಪ್ರಕೃತಿ ಪರಿಸರ, ಓದುವ ಕೌಶಲ್ಯ ಕುರಿತು 15 ದಿನದ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ಎಂದು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವದ್ದಿ ಇಲಾಖೆ ಉಪ ನಿರ್ದೆಶಕರಾದ ವೀರನಗೌಡ ಪಾಟೀಲ್ ಅವರು ಹೇಳಿದರು.
ಯಾದಗಿರಿ ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಇತ್ತೀಚಿನ ನಡೆದ ಬೆಂಗಳೂರು ರಾಜ್ಯ ಬಾಲ ಭವನ ಸೊಸೈಟಿ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ಜಿಲ್ಲಾ ಬಾಲ ಭವನ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯಲ್ಲಿ ಬೇಸಿಗೆ ಕಾಲದ ಕುರಿತು ಮಕ್ಕಳು ಬಿಸಿಲಲ್ಲಿ ಓಡಾಡದೆ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಮಕ್ಕಳು ಇಂತಹ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಈ ಒಂದು ಉಚಿತ ಬೇಸಿಗೆ ಶಿಬಿರ 15 ದಿನದ ತರಬೇತಿಯಲ್ಲಿ ತರಬೇತಿದಾರರು ಹೇಳಿಕೊಡುವ ಚಟುವಟಿಕೆಗಳನ್ನು ಕಲಿಯಬೇಕೆಂದು ಮಕ್ಕಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಯಾದಗಿರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ದಿನೇಶ್ ಕುಮಾರ ಅವರು ಮಾತನಾಡಿ ಪ್ರತಿಯೊಂದು ಮಕ್ಕಳಲ್ಲಿ ಕೌಶಲ್ಯ ಬೆಳವಣಿಗೆ ಇರುತ್ತದೆ. ಆದರೆ ಮಕ್ಕಳಿಗೆ ಸರಿಯಾದ ವೇದಿಕೆ ಕಲ್ಪಿಸಿರುವುದಿಲ್ಲಾ. ಆದ್ದರಿಂz ಇಂತಹ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಚಡುವಡಿಕೆಗಳನ್ನು ಪರಿಪೂರ್ಣ ಕಲಿತುಕೊಂಡು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು.
ಯಾದಗಿರಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ರುದ್ರಸ್ವಾಮಿ ಚಿಕ್ಕಮಠ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಈ ಹಿಂದೆ ನಾನು ಕೂಡ ಬಾಲ ಭವನದ ವತಿಯಿಂದ ಏರ್ಪಡಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದೇನೆ. ಆದರೆ ಇವಾಗ ನಾನು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯನಾಗಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂದಿರುವುದು ನನಗೆ ತುಂಬ ಖುಷಿಯಾಗಿದೆ. ಪ್ರತಿ ವರ್ಷವು ಬಾಲ ಭವನವು ಪ್ರತಿಯೊಂದು ಮಕ್ಕಳಲ್ಲಿರುವ ಪ್ರತಿಯೊಂದು ಪ್ರತಿಭೆಯನ್ನು ಹೊರತರುವ ಕೆಲಸ ಮಾಡುತ್ತಿದೆ ಎಂದು ಖುಷಿ ಪಟ್ಟರು.
ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಅನೀಲ್ ಕುಮಾರ ಮಾತನಾಡಿ, ಬೇಸಿಗೆ ಶಿಬಿರವನ್ನು 2025ರ ಮೇ 22ರ ವರೆಗೆ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಒಂದು ಶಿಬಿರದಲ್ಲಿ ಸುಮಾರು 80 ಮಕ್ಕಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಕುಮಾರಿ ಮಂಜುಳಾ, ಯಾದಗಿರಿ ಸರಕಾರಿ ಬಾಲಕಿಯರ ಬಾಲ ಮಂದಿರ ಅಧೀಕ್ಷಕರು ಶ್ರೀಮತಿ ನಾಗಮ್ಮ ಹಿರೇಮಠ, ಮಕ್ಕಳ ಜಾಗೃತಿ ಸಂಪನ್ಮೂಲ ವ್ಯಕ್ತಿ ದೇವಪ್ಪ, ನೃತ್ಯ ಶಿಕ್ಷಕರು ಮಧುಕುಮಾರ ಶಿಕ್ಷಕರು ವಿಶ್ವನಾಥ ಜಿಲ್ಲಾ ಕಾರ್ಯಕ್ರಮ ಸಹಾಯಕರು ಪ್ರಶಾಂತಕುಮಾರ ಉಪಸ್ಥಿತರಿದ್ದರು.
