ಎಸ್ಎಸ್ಎಲ್ಸಿ ಪರೀಕ್ಷೆ-2ಕ್ಕೆ ನೊಂದಾಯಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ
=================
ಬೀದರ ಮೇ.10:- 2025ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ-2ನ್ನು ದಿನಾಂಕ: 26-05-2025 ರಿಂದ 02-06-2025ರವರೆಗೆ ನಡೆಸಲಾಗುತ್ತಿದೆ. ಪರೀಕ್ಷೆ-1ರಲ್ಲಿ ನೊಂದಾಯಿಸಿಕೊAಡು ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ-2ರಲ್ಲಿ ನೊಂದಾಯಿಸಲು ಯಾವುದೇ ಶುಲ್ಕ ಪಡೆಯುವುದಿಲ್ಲ. ಕಾರಣ ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದ ಜಿಲ್ಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ.12 ರಂದು ವಿದ್ಯುತ್ ವ್ಯತ್ಯಯ
===========
ಬೀದರ ಮೇ.10:- ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ ಗು.ವಿ.ಸ.ಕಂ ವ್ಯಾಪ್ತಿಯಲ್ಲಿ ಬರುವ 220ಕೆ.ವಿ ಹುಮನಾಬಾದ, ವಿದ್ಯುತ್ ಸ್ವೀಕರಣ ಕೇಂದ್ರದ 10ಎಂವಿಎ, 110/11ಕೆ.ವಿ ಪರಿವರ್ತಕದ ತುರ್ತು ಕೆಲಸದ ಪ್ರಯುಕ್ತ ದಿನಾಂಕ: 12-05-2025 ರಂದು ಬೆಳÀಗ್ಗೆ 8 ಗಂಟೆಯಿAದ 1 ಗಂಟೆವರೆಗೆ 11ಕೆವಿ ಕೆ.ಐ.ಡಿ.ಬಿ, 11ಕೆವಿ ಮುಸ್ತಾಪುರ, 11ಕೆವಿ ಆರ್.ಟಿ.ಒ, 11ಕೆವಿ ನೇಕ್ಟರ ಮತ್ತು 11ಕೆವಿ ಇಂಡಸ್ಟಿçÃಯಲ್ ಫೀಡರ ಮಾರ್ಗದ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಹುಮನಾಬಾದ 220ಕೆವಿ ಸ್ವೀಕರಣಾ ಕೇಂದ್ರದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಮನಾಬಾದ: ಐಟಿಐ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ
=============
ಬೀದರ ಮೇ.10:-ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹುಮನಾಬಾದನಲ್ಲಿ ಅಗಸ್ಟ್-2025ನೇ ಶೈಕ್ಷಣಿಕ ಸಾಲಿನ ಮೇರಿಟ್-ಕಂ-ರಿಸರ್ವೇಶನ್ ಆಧಾರಿತ ಐಟಿಐ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಹುಮನಾಬಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ www.cite.karnataka.gov.in ಮೂಲಕ ದಿನಾಂಕ: ದಿನಾಂಕ: 28-05-2025 gವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹುಮನಾಬಾದ ಅಥವಾ ಮೊಬೈಲ್ ಸಂಖ್ಯೆ: (9449041472), (9448100294), (7483148185) ಹಾಗೂ 9448150536 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
=========
ಬೀದರ ಮೇ.10:- ಜೇಸ್ಕಾಂ ಬೀದರ ವಿಭಾಗದಲ್ಲಿ ಬರುವ 11ಕೆವಿ ದರ್ಗಾಪೂರ ಫೀಡರ ಮೇಲೆ ಬರುವ ದುಲಹನದವಾಜ, ಮನಿಯಾರ ತಾಲೀಮ್, ಡಿಸೆಂಟ್ ಫಂಕ್ಷನ ಹಾಲ ಸುತ್ತಮುತ್ತಲಿನ ಪ್ರದೇಶ, ಗೊಲಖಾನ್ ಶಾಹಿನ್ ಶಾಲೆ, ಮಹ್ಮದ ಗವಾನ ಚೌಕ, ಮಹ್ಮದ ಗವಾನ ಮರ್ಸ್ ಉಸ್ಮಾನಗಂಜ, ಭೀಮನಗರ, ದರ್ಗಾಪೂರ, ರೌಳೆ ಗಲ್ಲಿ, ಶಂಶಾಹ ಕಾಲೋನಿ ಬಾಬಾ ಫಂಕ್ಷನ ಹಾಲ್, ಎ.ಸಿ. ಮತ್ತು ಡಿ.ಸಿ. ಮನೆಗಳು ಮತ್ತು ಬೀದರ ಕೋಟೆ ಒಳಗಡೆ ಇರುವ ಪ್ರದೇಶಗಳಲ್ಲಿ
11ಕೆವಿ ನಿಸರ್ಗ ಫೀಡರ್ ಮೇಲೆ ಬರುವ ಸಾಯಿ ನಗರ, ನಿಸರ್ಗ ಲೇಔಟ್, ಕಡಿಲ್ ಮಹಾಲ್, ಕೆ.ಇ.ಬಿ.ಕಾಲೋನಿ, ಹಕ್ಕ್ ಕಾಲೋನಿ, ಹಳೆ ಮೈಲೂರು, ಸಿದ್ದರಾಮಯ್ಯಾ ಬಡಾವಣೆ, ಶೇರಿಕಾರ ಲೇಔಟ್ ಸುತ್ತ-ಮುತ್ತಲಿನ ಪ್ರದೇಶ
11ಕೆವಿ ಫೈಜಪೂರ್, ಫೀಡರ ಮೇಲೆ ಬರುವ ನಂದಿ ಪೆಟ್ರೋಲ್ ಬಂಕ್, ಖಾಜಿ ಕಲೋನಿ, ಜೆರುಸಲಂ ಕಾಲೋನಿ, ಹಳದಗೇರಿ, ಎ.ಪಿ.ಬಗಂಲೆ, ಲಾಡಗೇರಿ, ಹೂಗೇರಿ, ಎಫ್.ಕೆ.ಪೆಟ್ರೋಲ್ ಬಂಕ, ಹೈದ್ರಾಬಾದ ರೋಡ್, ಅಬ್ದುಲ್ ದರ್ಗಾ ಸುತ್ತಮುತ್ತಲಿನ ಪ್ರದೇಶ
ಈ ಮೇಲಿನ ಫೀಡರಗಳ ಮೇಲೆ ಕಾಮಗಾರಿ ಹಾಗೂ ತುರ್ತು ನಿರ್ವಹಣೆ ಕೆಲಸವಿರುವ ಕಾರಣ ದಿನಾಂಕ: 11-05-2025 ರಂದು ಬೆಳಿಗ್ಗೆ 8 ಗಂಟೆಯಿAದ ಸಾಯಂಕಾಲ 2 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಬೀದರ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ: ಐಟಿಐ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ
==============
ಬೀದರ ಮೇ.10:- ಬೀದರ ಜಿಲ್ಲೆಯ ಸರಕಾರಿ/ಅನುದಾನಿತ ಐಟಿಐ ಗಳ ವಿವಿಧ ವೃತ್ತಿಗಳಗೆ 2025-26ನೇ ಶೈಕ್ಷಣಿಕ ಸಾಲಿನ ಪ್ರವೇಶಕಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಅಹ್ವಾನಿಸಿದ್ದು, ಮೆರಿಟ ಕಮ್ ರಿಜರ್ವೇಶನ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು, ಹತ್ತನೇ ಪಾಸಾದ, 14 ವರ್ಷ ಮೇಲ್ಪಟ್ಟ ಹಾಗೂ ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ / 8ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಬೆಸುಗೆಗಾರ ವೃತ್ತ್ತಿಗೆ (ವೆಲ್ಡರ್ ಟ್ರೇಡ್) ವಿದ್ಯಾರ್ಥಿಗಳು ದಿನಾಂಕ 09-05-2025 ರಿಂದ 28-05-2025ರ ವರೆಗೆ ಅರ್ಜಿಯನ್ನು ಆನ್ಲೈನ್ ವೆಬ್ಸೈಟ http://cite.karnataka.gov.in ನಲ್ಲಿ ಸಲ್ಲಿಸಬಹುದು ಅಥವಾ ಸಮೀಪದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ Help Desk ಗಳಲ್ಲಿ ಮಾಹಿತಿ ಪಡೆದು ಅಲ್ಲಿಯೆ ಅರ್ಜಿ ಹಾಕಬಹುದು ಅಥವಾ ಯಾವುದೇ ಸೈಬರ್ ಕಫೆನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬೀದರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬೀದರ (9901097655), (7259854729), ಹುಮನಾಬಾದ (9449041472), ಔರಾದ (9740314795), ಬಸವಕಲ್ಯಾಣ (9945834467), ಭಾಲ್ಕಿ (9110412264) ಹಾಗೂ ಕಮಲನಗರ (9448349888) ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
