ಕಲಬುರಗಿ,ಫೆ.20: ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಜಾತ್ರೆ ಮೈದಾನದಲ್ಲಿ ಇದೇ ಫೆಬ್ರವರಿ 24 ರಿಂದ ಮಾರ್ಚ್ 5ರ ವರೆಗೆ 10 ದಿನಗಳ ಕಾಲ ಮಹಿಳಾ ಸ್ವ-ಸಹಾಯ ಗುಂಪುಗಳು ತಯ್ಯಾರಿಸಿದ ವಸ್ತುಗಳ ಬೃಹತ್ ರಾಷ್ಟ್ರ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಸಲು ನಿರ್ಧರಿಸಿರುವ ಕಾರಣ ಕೂಡಲೆ ಮೇಳ ಯಶಸ್ಸಿಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಆಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
ಬುಧವಾರ ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ತಯಾರಿ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾ ಡಿದರು.
ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಆಯೋಜಿಸಿರುವ ಸರಸ್ ಮೇಳವನ್ನು ಫೆಬ್ರವರಿ 24 ರಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರು ಉದ್ಘಾಟಿಸಲಿದ್ದು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಸಹ ಆಗಮಿಸಲಿದ್ದಾರೆ ಎಂದರು.
10 ದಿನಗಳ ಕಾಲ ಮೇಳ ನಡೆಯುವುದರಿಂದ ಒಟ್ಟಾರೆ ದೇಶ ವಿವಿಧ ರಾಜ್ಯಗಳ ಸುಮಾರು 2,000 ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳ ಮಹಿಳೆಯರು, ಯುವ ಜನತೆ ಆಗಮಿಸಲಿದ್ದಾರೆ. ಮೇಳದಿಂದ ಸಹಜವಾಗಿಯೇ ಜಾತ್ರೆ ಮೈದಾನ ಪ್ರದೇಶದ ಸುತ್ತ ಜನಸಂದಣಿ ಹೆಚ್ಚಾಗುವುದರಿಂದ ಮೇಳಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆಯಾ ಗದ ರೀತಿಯಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಪೊಲೀಸ್ ಬಂ ದೋ ಬಸ್ತ್, ವಾಹನಗಳ ಪಾರ್ಕಿ ಗ್ ವ್ಯವಸ್ಥೆ, ಸುಗಮ ಸಂಚಾರಕ್ಕೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.
ಇನ್ನು ಮುಂಜಾಗ್ರತಾ ಕ್ರಮವಾಗಿ ಜಾತ್ರೆ ಮೈದಾನದಲ್ಲಿ ಒಂದು ವೈದ್ಯಕೀಯ ತಂಡ ಮತ್ತು ಅಗ್ನಿಶಾಮಕ ವಾಹನ ಸ್ಥಳದಲ್ಲಿಯೇ ನಾತಿಸಬೇಕು ಎಂದ ಜಿಲ್ಲಾಧಿಕಾರಿಗಳು, ಮೇಳ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಿದ್ದು, ಆಯಾ ಸಮಿತಿಗಳಿಗೆ ನೀಡಲಾದ ಜವಾಬ್ದಾರಿಯನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು.
ಕಲಬುರಗಿಯ 10 ಸೇರಿ ರಾಜ್ಯದ 60 ಸ್ಟಾಲ್ ಸ್ಥಾಪನೆ: ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಮಗ್ ಮೀನಾ ಮಾತನಾಡಿ ಈ ಮೇಳದಲ್ಲಿ ಕಲಬುರಗಿಯ 10 ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳು ತಯ್ಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಬೆಳಿಗ್ಗೆ 10.30 ರಿಂದ ರಾತ್ರಿ 9.30 ರ ವರೆಗೆ ಮೇಳ ನಡೆಯಲಿದ್ದು, ಕರ್ನಾಟಕದ 60 ಸೇರಿ 20 ರಾಜ್ಯಗಳ ಒಟ್ಟಾರೆ 250 ಮಳಿಗೆ ಇಲ್ಲಿ ತೆರೆಯಲಾಗುತ್ತಿದೆ ಎಂದರು.
ಇನ್ನು 20 ಲೈವ್ ಪುಡ್ ಕೋರ್ಟ್ ನಲ್ಲಿ ರಾಜ್ಯದ 10 ಮಳಿಗೆಗಳು ಹಾಗೂ ಬೇರೆ ರಾಜ್ಯಗಳ 10 ಲೈವ್ ಫುಡ್ ಸ್ಟಾಲ್ ಗಳಿರಲಿವೆ. “ಅಕ್ಕ ಕೆಫೆ ಶೀರ್ಷಿಕೆ ಅಡಿಯಲ್ಲಿ ಸ್ಥಾಪಿಸಲ ಇಗುತ್ತಿರುವ ಲೈವ್ ಫುಡ್ ಕೋರ್ಟ್ ನಲ್ಲಿ ರುಚಿ ಹಾಗೂ ಶುಚಿಯಾದ ಆಹಾರ ಪದಾರ್ಥಗಳು ಕೈಗೆಟುಕುವ ಬೆಲೆಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಪ್ರಮುಖವಾಗಿ ದಾವಣಗೆರೆ ಬೆಣ್ಣೆ ದೊಸೆ, ಮೈಸೂರು ಮಸಾಲ ದೊಸೆ, ಗಿರಮಿಟ್, ಬಜ್ಜಿ ಸೇರಿದಂತೆ ವಿವಿಧ ವೈವಿಧ್ಯಮಯ ಖಾದ್ಯಗಳು ದೊರೆಂ ಯಲಿವೆ. ಸ್ಥಳದಲ್ಲೇ ವಿವಿಧ ತಿಂಡಿ ಹಾಗೂ ಭಕ್ಷ್ಯಗಳನ್ನು ತಯಾರಿಸಿ ಕೊಡಲಾಗುತ್ತದೆ ಎಂದರು.
ಮನ ತಣಿಸಲಿದೆ ಸಾಂಸ್ಕೃತಿಕ ಸಂಜೆ ನಮ್ಮ ಸರಸ್ ಮೇಳದಲ್ಲಿ 10 ದಿನಗಳ ಕಾಲ ಪ್ರತಿ ದಿನ ಸಂಜೆ 6.30 ರಿಂದ 9.39 ಗಂಟೆ ವರೆಗೆ ರಾಜ್ಯದ ಖ್ಯಾತ ಸಂಗೀತಗಾರರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸ್ಥಳೀಯ ಕಲಾವಿದು ಂದ ವಿವಿಧ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಸ್ತು ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ತಣಿಸಲಿವೆ ಎಂದು ಭಂವರ್ ಸಿಂಗ್ ಕಾರ್ಯಕ್ರಮಗಳ ರೂಪುರೇಷೆ ವಿವರಿಸಿದರು.
ಸರಸ್ ಮೇಳದಲ್ಲಿ ವೈವಿಧ್ಯಮಯ
ಉತ್ಪನ್ನಗಳು: ಕರ್ನಾಟಕದ ಇಳಕಲ್ ಸೀರೆ, ಕಸೂತಿ ವಸ್ತುಗಳು, ಚನ್ನಪಟ್ಟಣ ಗೊಂಬೆ, ಬೀದರ ಜಿಲ್ಲೆಯ ಬಿದು ಆಲಂಕಾರಿಕ ಉತ್ಪನ್ನಗಳು, ಕೊಪ್ಪಳ ಜಿಲ್ಲೆಯ ಕಿನ್ನಾಳ ಮಕ್ಕಳ ಆಟದ ಗೊಂಬೆಗಳು, ಉತ್ತರ ಭಾರತದಿಂದ ಜಮ್ಮು ಕಾಶ್ಮೀರದ ಕಸೂತಿ ಉಡುಪುಗಳು, ಪಂಜಾಬ್ ಬಳಿಗಳು, ಸಿಕ್ಕಿಂ ಮತ್ತು ಬಿಹಾರದ ಕೈಮಗ್ಗ, ದಕ್ಷಿಣ ಭಾರತದ ತಮಿಳುನಾಡಿನ ಕೃತಕ ಆಭರಣಗಳು, ಕೇರಳದ ಮಣಿಗಳು, ಆಂಧ್ರ ಪ್ರದೇಶದ ಆಟಿಕೆಗಳು ಸೇರಿದಂತೆ ಮುಂತಾದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಪ್ರಮುಖ ಆಕರ್ಷಣೆಯಾಗಿರಲಿದೆ.
ಸಾಮರ್ಥ್ಯಾಭಿವೃದ್ಧಿ ತರಬೇತಿ
ಕಾರ್ಯಾಗಾರ: ನಮ್ಮ ಸರಸ್ ಮೇಳದ ಮುಖ್ಯ ವೇದಿಕೆಯ ಪ್ರಾಂಗಣದದಲ್ಲಿ ಪ್ರತಿದಿನ ವಿವಿಧ ತರಬೇತಿ ಕಾರ್ಯಾಗಾರಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಮಹಿಳೆಯರ ಉತ್ಪನ್ನಗಳಿಗೆ ಪ್ಯಾಕಿಂಗ್ ಹಾಗೂ ಬ್ಯಾಂಡಿಂಗ್, ಮಾರುಕಟ್ಟೆ ಕೌಶಲ್ಯ, ಉತ್ಪನ್ನಗಳ ಮೌಲ್ಯವರ್ಧನೆ. ಸರ್ಕಾರದ ವಿವಿಧ ಇಲಾಖೆಯ ಂದ ಸಿಗುವ ಸೌಲಭ್ಯಗಳು, ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸಾಮಾಜಿಕ ವಿಮಾ ಭದ್ರತಾ ಸೌಲಭ್ಯ ಸೇರಿದಂತೆ ಅವರ ಉದ್ಯಮವನ್ನು ಮೇಲ್ದರ್ಜೆಗೆ ಏರಿಸಲು ಬ್ಯಾಂಕ್ ಲಿಂಕೇಜ್ ಸೇವೆಗಳ ಕುರಿತು ಉಪನ್ಯಾಸ ಹಾಗೂ ತರಬೇತಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು “ನಮ್ಮ ಸರಸ್ ಮೇಳ-2025ರ ಪ್ರಚಾರ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ. ಅಡ್ವರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
