ಯಾದಗಿರಿ: ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಇಂದು ಸಂಜೆ 6:30ಕ್ಕೆ ಸಡಗರದಿಂದ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.
ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ತೇರಿಗೆ ವಿಶೇಷ ಪೂಜೆಯನ್ನು ನೆರವೇರಿಸಿ,ಉತ್ಸವ ಮೂರ್ತಿಯೊಂದಿಗೆ ಶ್ರೀಗಳು ರಥವನ್ನು ಏರಿದ ಕೂಡಲೇ ಭಕ್ತಾದಿಗಳು ಸಡಗರದಿಂದ ರಥವನ್ನು ಎಳೆದು ಸಂಭ್ರಮ ಪಡುವರು.
ರಾತ್ರಿ 8:00 ಗಂಟೆಗೆ ಮಾನವ ಧರ್ಮ ಸಮಾವೇಶ ನಡೆಯುವುದು. ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಸಮಾವೇಶದ ಪಾವನ ಸಾನಿಧ್ಯವನ್ನು ವಹಿಸುವರು. ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಸಚಿವರಾದ ಪ್ರಿಯಾಂಕ ಖರ್ಗೆ, ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರು ವಿವಿಧ ಗ್ರಂಥಗಳನ್ನು ಬಿಡುಗಡೆ ಮಾಡುವರು.
ಇದೆ ಸಂದರ್ಭದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಜಿಲ್ಲಾ ಚುನಾವಣಾ ಅಧಿಕಾರಿಗಳೆಂದು ಪ್ರಶಸ್ತಿ ಪಡೆದಿರುವ ಯಾದಗಿರಿಯ ಜಿಲ್ಲಾಧಿಕಾರಿಗಳಾದ ಡಾ.ಸುಶೀಲ ಬಿ ಅವರನ್ನು ಮಾನವ ಧರ್ಮ ಸಮಾವೇಶದಲ್ಲಿ ವಿಶೇಷವಾಗಿ ಸತ್ಕರಿಸಲಾಗುವುದು.
ಜಾತ್ರಾ ಮಹೋತ್ಸವದಲ್ಲಿ ವಿವಿಧ ಸೇವಾ ಕೈಂಕರ್ಯವನ್ನು ಕೈಗೊಂಡ ಸೇವಾರ್ಥಿಗಳಾದ ರಾಯಚೂರಿನ ಗೋಪಲಾ ಶರಣರು, ಸುರೇಶ ರೆಡ್ಡಿ,ಬಸವರಾಜಪ್ಪ ದೇವದುರ್ಗ, ಭೀಮಣ್ಣ ಗಂಗಾರಾಯ, ಬಸವರಾಜ ಮುಡಮಾಲ್, ಯಾದಗಿರಿಯ ಡಾ. ವೀರಭದ್ರಪ್ಪ ಎಲ್ಹೇರಿ, ಶ್ರುತಿ,ಡಾ.ಪವನ ಪ್ಯಾರಸಬಾದಿ , ಕಲಬುರಗಿಯ ರಾಮಲಿಂಗ ಮಹಂತಪ್ಪ ಹಾವನಳ್ಳಿ,ಅನಂತಪ್ಪ ಯದ್ಲಾಪೂರ,ಗಂಗಾವತಿಯ ಸುರೇಶ ಬಾಳೆಕಾಯಿ, ನವೀಶ್ ಇಮಡಾಪೂರ, ದೇವಿಂದ್ರಪ್ಪ ಅಲ್ಲೂರ ಶರಣರು, ವಸಂತ ಸುರಪೂರಕರ್, ಡಾ.ಚಾಂದಪಾಷ,ಉಮೇಶ ಬಸವರಾಜ ಬಸಣ್ಣೋರ್ ನಾಚವಾರ, ಪ್ರಕಾಶ ಯಾದವ ಸುರುಪುರ, ಬಿ.ಶೇಖರ ಆದೋನಿ, ರಾಜು ಬಾಂಬೆ, ರಾಜಶೇಖರ ಲದ್ದಿ, ಮುಂತಾದವರನ್ನು ಸತ್ಕರಿಸಲಾಗುವುದು.
ಶ್ರೀ ವಿಶ್ವಾರಾಧ್ಯರ ಶ್ರೀಮಠದ ಸೇವೆಯಲ್ಲಿ ಸದಾ ನಿರತರಾದ ಶಹಾಬಾ ವಿಶ್ವರಾಧ್ಯ ಬಿರಾಳ, ಅಲ್ಲೂರಿನ ದೇವಿಂದ್ರಪ್ಪ ಸಣ್ಣದ, ಕಾಡಂಗೇರಾದ ಮಲ್ಲಪ್ಪ ಅಯ್ಯಪ್ಪ, ಮತ್ತು ಯರಗೋಳದ ರಾಜಪ್ಪ ಸಾಧು ಈ ಸದ್ಭಕ್ತರಿಗೆ ಅನುಭಾವ ಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು.
ಡಾ. ಕರಿವೃಷಭ ರಾಜದೇಶಿಕೇಂದ್ರ ಮಹಾ ಸ್ವಾಮಿಗಳು ನೊಣವಿನಕೆರೆ,ಹಾರಕೂಡದ ಡಾ. ಚನ್ನವೀರ ಶೀವಾಚಾರ್ಯರು, ಡಾ.ಶಿವಾನಂದ ಮಹಾಸ್ವಾಮಿಗಳು ಸೊನ್ನ, ಶಹಾಪೂರ ಕುಂಬಾರಗೇರಿ ಹಿರೇಮಠದ ಶ್ರೀ ಸೂಗುರೇಶ್ವರ ಶಿವಾಚಾರ್ಯರು, ಸಿದ್ಧರಾಮಪುರದ ಗೋಲಪಲ್ಲಿಯ ಶ್ರೀ ವರದಾನೇಶ್ವರ ಸ್ವಾಮಿಗಳು,ಬಸವಕಲ್ಯಾಣದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ನಿಲೋಗಲ್ ಶ್ರೀಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯರು, ನೇರಡಗಂ ನ ಶ್ರೀಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು,ನಾಗಣಸೂರನ ಶ್ರೀಕಂಠ ಶಿವಾಚಾರ್ಯರು, ಶ್ರೀಕಾರ್ತಿಕೇಶ್ವರ ಶಿವಾಚಾರ್ಯರು ಮಳಖೇಡ, ಮತ್ತು ಗುಂಡಗುರ್ತಿಯ ಶ್ರೀ ರುದ್ರಮುನಿ ಶಿವಾಚಾರ್ಯರು, ಮುನಿಂದ್ರ ಸ್ವಾಮೀಜಿ ಹಲಕರ್ಟಿ, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೆಡಗಿಮದ್ರಾ, ಶ್ರೀ ಶಿವಮೂರ್ತಿ ಸ್ವಾಮೀಜಿ ದೇವಾಪೂರ, ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರು ಎಲ್ಹೇರಿ, ತೊನಸನ ಹಳ್ಳಿಯ ಮಲ್ಲಣ್ಣಪ್ಪ ಶರಣರು, ಮುಂತಾದ ಪೂಜ್ಯರು ಮಾನವ ಧರ್ಮ ಸಮಾವೇಶದಲ್ಲಿ ಅನುಭಾವ ನೀಡಲಿದ್ದಾರೆ.
ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಭೋಸರಾಜು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್, ಸಂಸದರಾದ ಜಿ. ಕುಮಾರ ನಾಯಕ ರಾಧಾ ಕೃಷ್ಣನ್, ಶಾಸಕರಾದ ಚನ್ನಾರಡ್ಡಿ ಪಾಟೀಲ ತುನ್ನೂರ, ಶರಣಗೌಡ ಕಂದಕೂರ, ಕರೆಮ್ಮ, ಬಸನಗೌಡ ದದ್ದಲ್, ಬಸವರಾಜ ಮತ್ತಿಮೂಡ, ಅಲ್ಲಮಪ್ರಭು ಪಾಟೀಲ, ಎಂ.ವಾಯ್.ಪಾಟೀಲ, ವಿ.ಪ.ಸದಸ್ಯ ಬಿ.ಜಿ.ಪಾಟೀಲ,ನಗರಸಭೆಯ ಅಧ್ಯಕ್ಷೆ ಲಲಿತಾ ಅನಪೂರ, ಮಾಜಿ ಶಾಸಕರಾದÀ, ರಾಜುಗೌಡ (ನರಸಿಂಹನಾಯಕ), ಸಿದ್ದರಾಮ ಮೇತ್ರೆ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಗುರು ಪಾಟೀಲ ಶಿರವಾಳ.ಲಿಂಗಾರೆಡ್ಡಿ ಭಾಸರೆಡ್ಡಿ,ರಾಚಣ್ಣ ಗೌಡ ಮುದ್ನಾಳ,ಮಹೇಶ ರೆಡ್ಡಿ ಮುದ್ನಾಳ,ಸಿದ್ದಣ್ಣ ಗೌಡ ಕಾಡಮನೋರ,ಚಂದ್ರಶೇಖರ ಸಾಹು ಆರಬೋಳ,ಹಣಮಂತ ಗೌಡ ಹೀರೆಗೌಡ್ರು,ಬಸ್ಸು ಗೌಡ ಬಿಳ್ಹಾರ ಸೇರಿದಂತೆ ಅನೇಕ ಗಣ್ಯರು ಮಾನವ ಧರ್ಮ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ.
ನಂತರ ಬೆಂಗಳೂರಿನ ಜೀ ಕನ್ನಡ ಸರಿಗಮ ಖ್ಯಾತಿಯ ಅಶ್ವಿನ ಶರ್ಮ ಹಾಗೂ ಸರಿಗಮ ಖ್ಯಾತಿಯ ಕಲಾವಿದರ ತಂಡದವರಿAದ ರಸಮಂಜರಿ ಕಾರ್ಯಕ್ರಮ ನಡೆಯಲಿದೆಯೆಂದು ಡಾ.ಕೌಲಗಿ ತಿಳಿಸಿದ್ದಾರೆ.
ಪುರಾಣ ಮಂಗಲ: ಸೋಮವಾರ ಬೆಳಗ್ಗೆ ಸೂರ್ಯೋದಯವಾಗುತ್ತಲೇ ಶ್ರೀ ವಿಶ್ವರಾಧ್ಯರ ಕರ್ತೃ ಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಹನ್ನೊಂದು ದಿವಸಗಳಿಂದ ಸಾಗಿಬಂದ ವಿಶ್ವಾರಾಧ್ಯ ಪುರಾಣ. ಪಲ್ಲಕ್ಕಿ ಉತ್ಸವದ ಮೆರವಣಿಗೆ ಮಂಗಲ ವಾದ್ಯಗಳೊಂದಿಗೆ ಪುರವಂತರ ಸೇವೆ ಸಮೇತ ಗ್ರಾಮದಲ್ಲಿ ನಡೆಯಿತು. ಪ್ರವಚನಕಾರರಾದ ರುದ್ರಯ್ಯ ಶಾಸ್ತಿçಗಳು ಮದ್ಲಾಪೂರ ಅವರು ಪೀಠಾಧಿಪತಿಗಳಾದ ಡಾ.ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ವಿಶ್ವಾರಾಧ್ಯರ ಪುರಾಣವನ್ನು ಮಂಗಲಗೊಳಿಸಿದರು.